ನಾನು ಪ್ರಾಥಮಿಕ ಶಾಲಾ ಶಿಕ್ಷಕ, ಶಿಕ್ಷಣ ಇಲಾಖೆಯಿಂದ 2021ರಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ. ಸಾಹಿತ್ಯದ ಕುರಿತು ಹೆಚ್ಚು ಉತ್ಸುಕ, ಬರೆಯುವ ಹವ್ಯಾಸ , ಶಿಕ್ಷಣದ ಕುರಿತು ಹೆಚ್ಚು ಬರೆಯುತ್ತಿದ್ದೇನೆ. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. 2022 ಡಿಸೆಂಬರ್ ನಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ಡಾ.ಜಾಜಿ ದೇವೇಂದ್ರಪ್ಪ ಸರ್ ಅವರ ಮಾರ್ಗದರ್ಶನದಲ್ಲಿ “ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ”ವಿಷಯದ ಮೇಲೆ ಪಿಎಚ್.ಡಿ.ಪದವಿ ಪಡೆದಿದ್ದೇನೆ.